ಅವತ್ತು ನಾವು ಹೊರಟ ಜಾಗಕ್ಕೆ ಇದ್ದ ಹೆಸರಲ್ಲೇ ಒಂದು ಕೌತಕವಿತ್ತು... 'ಮಿಸ್ಟಿರೀ ಸ್ಪಾಟ್' !
ಕುಪರ್ಟಿನೋದಿಂದ ೨ ಗಂಟೆ ಡ್ರೈವ್ ನಂತರ ನಾವು ಒಂದು ಕಾಡಿನಂತ ಜಾಗ ಹೊಕ್ಕಾಗ ನಾವು ನಿಜಕ್ಕೂ 'ಮಿಸ್ಟಿರೀ ಸ್ಪಾಟ್' ಕಡೆ ಹೊರಟಿದ್ದಿವಾ ಅಥವಾ ಅದು ಎಲ್ಲಿದೆ ಅಂತಾ ಹುಡುಕೋದೇ ಒಂದು 'ಮಿಸ್ಟರೀ' ಆಗೋತ್ತೋ ಅಂತಾ ಅನಿಸಿಕೆ ನಮ್ಮಲ್ಲಿ. ರಸ್ತೆ ಫಲಕಗಳನ್ನು ಪಾಲಿಸಿಕೊಂಡು ಕೊನೆಗೂ ಆ ಕಾಡಿನ ಮಧ್ಯೆ ಒಂದು ಅತೀ ಚಿಕ್ಕ ಗುಡ್ಡದ ಹತ್ತಿರ ಬಂದು ನಿಂತೆವು. ಎದುರಲ್ಲೇ 'ಮಿಸ್ಟಿರೀ ಸ್ಪಾಟ್ಗೆ ಪ್ರವೇಶ ದ್ವಾರ' ಅಂತಾ ದೊಡ್ಡ ಫಲಕ.
೫ $ ಕೊಟ್ಟು ಪ್ರವೇಶ ಚೀಟಿ ಪಡೆದು, ಒಂದು ಹತ್ತು ನಿಮಿಷ ಕಾಯ್ದೆವು. ೨೦ ಜನರ ಗುಂಪು ಮಾಡಿ ಒಳೆಗೆ ಬಿಡ್ತಾ ಇದ್ದರು. ಒಬ್ಬ 'ಮಿಸ್ಟಿರೀ ಸ್ಪಾಟ್'ನ ಗೈಡ್ ಬಂದು ನಮ್ಮನ್ನು ಒಳೆಗೆ ಕರೆದುಕೊಂಡು ಹೋದ. ಮೊದಲು ಅವನು ಕರೆದುಕೊಂಡು ಹೋಗಿ ನಮ್ಮನೆಲ್ಲಾ ಒಂದು ಸ್ಥಳದ ಸುತ್ತ ನಿಲ್ಲಿಸಿದ. ಅಲ್ಲಿ ನಡುವಲ್ಲಿ ಇದ್ದವು ಎರಡು ಚಿಕ್ಕ ಸಿಮೆಂಟ್ನ ಕಟ್ಟೆ.ಗುಂಪಿನಿಂದ ೫ ಅಡಿ ಮತ್ತು ಐದುವರೆ ಅಡಿ ಎತ್ತರದ ಇಬ್ಬರನ್ನು ಕರೆದ ಗೈಡ್ ಅವುಗಳ ಮೇಲೆ ಎದುರುಬದುರಾಗಿ ನಿಲ್ಲಲು ಹೇಳಿದ. ಅಂತಾ ವಿಶೇಷವೇನು ಕಾಣಲಿಲ್ಲ.ಈಗ ಅವರಿಬ್ಬರಿಗೆ ಪರಸ್ಪರ ಜಾಗ ಬದಲಾಯಸಿಕೊಳ್ಳಲು ಹೇಳಿದ. ಈಗ ಕಾದಿತ್ತು ಆಶ್ಚರ್ಯ, ೫ ಅಡಿಯ ವ್ಯಕ್ತಿಯ ಎತ್ತರ ಐದುವರೆ ಅಡಿಯ ವ್ಯಕ್ತಿಯಷ್ಟೇ ಅನಿಸ್ತಾ ಇತ್ತು !
ಅದರ ಬಗ್ಗೆ ಯೋಚನೆ ಮಾಡ್ತ ಇದ್ದಾಗೆ ಮುಂದಿನ ಜಾಗಕ್ಕೆ ಹೋದೆವು.ಅದೊಂದು ಇಳಿಜಾರು. ನೀವು ಇಳಿಜಾರಿನಲ್ಲಿ ನಿಂತಾಗ ನಿಮ್ಮ ಕಾಲು, ಆ ಇಳಿಜಾರಿಗೆ ಯಾವ ಕೋನದಲ್ಲಿ ಇದೆ ನೋಡಿ. ೯೦ ಡಿಗ್ರಿ ಕೋನದ ಅಸುಪಾಸು ಇರುತ್ತೆ. ಆದರೆ ಇಲ್ಲಿ ನಮ್ಮ ಕಾಲು ಹಾಗೀರದೆ ಸುಮಾರು ೧೨೦ ಡಿಗ್ರಿ ಕೋನದಲ್ಲಿತ್ತೇ? ನಮಗೆ ಇನ್ನೂ ಆಶ್ಚರ್ಯ.ಅದು ಮುಗಿಯುವ ಮೊದಲು ಗೈಡ್ ಕರೆದುಕೊಂಡು ಹೋಗಿದ್ದು 'ಫನ್ ಹೌಸ್'ಗೆ.
ಮರದಿಂದ ಮಾಡಿದ ಆ ಮನೆ ನೆಲಕ್ಕೆ ೩೦ ಡಿಗ್ರಿ ಕೋನಕ್ಕೆ ಬಾಗಿ ವಿಚಿತ್ರವಾಗಿ ಕಾಣುತಿತ್ತು. ಗೈಡ್ ಈಗ ಒಂದು ಸಮದಟ್ಟವಾದ ಮರದ ಹಲಗೆಯ ಮೇಲೆ ಒಂದು ಚೆಂಡನ್ನು ಇಟ್ಟ. ಸಮದಟ್ಟವಾದ್ದರಿಂದ ಚೆಂಡು ಅಲ್ಲೇ ನಿಲ್ಲುತ್ತೆ ಅಂದುಕೊಳ್ಳುವಷ್ಟರಲ್ಲಿ ಅದು ಆಗಲೇ ಆ ಮನೆ ಕಡೆ ಉರುಳೋಕೆ ಶುರುವಾಗಿತ್ತು.ಈಗ ಆ ಮನೆ ಒಳೆಗೆ ಹೊಕ್ಕಾಗ ಯಾವುದೋ ಒಂದು ಕಾಣದ ಕೈ ದೂಕುವಂತ ಅನುಭವ. ನಾವೆಲ್ಲರೂ ನೆಲಕ್ಕೆ ೪೫ ಡಿಗ್ರಿಯಲ್ಲಿ ಇದ್ದೀವಿ ಅನಿಸ್ತಿತ್ತು. ಅದೇ ಕೋಣೆಯಲ್ಲಿದ್ದ ಟೇಬಲ್ ಮೇಲೆ ಹತ್ತಿದ ಗೈಡ್ ಮೆಟ್ರಿಕ್ಸ್ ಸಿನಿಮಾ ಶೈಲಿಯಲ್ಲಿ ಅಲ್ಲಿಂದ ಗಾಳಿಯಲ್ಲಿ ನೆಲಕ್ಕೆ ಸುಮಾರು ೩೦ ಡಿಗ್ರಿ ಕೋನದಲ್ಲಿ ನಿಲ್ಲುವುದೇ ! ನಾವು ನೋಡೇಬಿಡೋಣ ಅಂದುಕೊಂಡು ಆ ಟೇಬೆಲ್ ಮೇಲಿಂದ ನಿಂತು ಮುಂದೆ ಬಾಗಿದೆವು. ಅರೇ ! ನಾವು ಸಹ ಗೈಡ್ನಂತೆ ಗಾಳಿಯಲ್ಲಿ ನಿಂತಂತೆ ಭಾಸವಾಗ್ತಿತ್ತು.ಗುರುತ್ವಾಕರ್ಷಣೆಯ ನಿಯಮಗಳೆಲ್ಲಾ ಇಲ್ಲಿ ಮರೆತು ಹೋದಂತೆ ಕಾಣುತಿತ್ತು.
ಆ ಮನೆ ಒಳಗಿದ್ದ ಬಾಗಿಲಲ್ಲಿ ಜೋತು ಬಿದ್ದಾಗ ನಮ್ಮ ದೇಹ ಮತ್ತೆ ಯಾವ ಕಡೆಗೋ ಎಳೆದಂತೆ ಅನಿಸಿತು. ಬಾಗಿಲಿಂದ ಅಥವಾ ಎತ್ತರದ ಬಾರ್ನಿಂದ ಜೋತು ಬಿದ್ದಾಗ ನಮ್ಮ ದೇಹ ಆ ಬಾಗಿಲಿಗೆ ಅಥವಾ ಬಾರ್ಗೆ ಸಮಾನಂತರವಾಗಿರುತ್ತೆ.ಆದರೆ ಇಲ್ಲಿ ಬಾಗಿಲಿಗೆ ದೇಹ ಮತ್ತೆ ೪೫ ಡಿಗ್ರಿ ಕೋನದಲ್ಲಿರುವುದೇ.
ಎನೋ ವಿಚಿತ್ರವಾಗಿತ್ತು ಆ ಮರದ ಮನೆ !
ಅಲ್ಲಿಂದ ಹೊರಬಂದಾಗ ಗೈಡ್ ವಿವಿಧ ಎತ್ತರದ ೪-೫ ಜನರನ್ನು ಒಂದು ಕಟ್ಟೆ ಮೇಲೆ ಎತ್ತರಕ್ಕೆ ಅನುಗುಣವಾಗಿ ನಿಲ್ಲಲು ಹೇಳಿದ. ಎಲ್ಲಾ ಸರಿಯಾಗಿ ಇತ್ತು. ನಂತರ ಆ ಗುಂಪಿನಲ್ಲಿ ಅತೀ ಉದ್ದದ ಮತ್ತು ಅತೀ ಚಿಕ್ಕ ವ್ಯಕ್ತಿಗಳನ್ನು ಜಾಗ ಅದಲುಬದಲಿಸುವಂತೆ ಹೇಳಿದ. ಮತ್ತೆ ಆಶ್ಚರ್ಯ ಕಾದಿತ್ತು. ಅವರಿಬ್ಬರೂ ಒಂದೇ ಎತ್ತರದಲ್ಲಿರುವಂತೆ ಅನಿಸುತಿತ್ತು !
ಗೈಡ್ ಈಗ ಆ ಮನೆಯ ಸುತ್ತ ಇರೋ ಮರಗಳ ಬಗ್ಗೆ ಹೇಳ್ತಾ ಇದ್ದ. ಅಲ್ಲಿದ್ದ ಎಲ್ಲಾ ಮರಗಳು ವಿಚಿತ್ರವಾದ ಕೋನದಲ್ಲಿ ಬಾಗಿದಂತೆ ಅನಿಸ್ತಾ ಇದ್ದವು ಅಥವಾ ಗೈಡ್ ಹಾಗೇ ಹೇಳಿದ ಮೇಲೆ ಹಾಗೇ ಅನಿಸಿತೋ ತಿಳಿಯಲಿಲ್ಲ. ಅವನು ಹೇಳಿದ ಹಾಗೇ ಅಲ್ಲಿ ಒಂದು ಪಕ್ಷಿಗಳು ಇರಲಿಲ್ಲ.
ಅಲ್ಲಿಂದ ಹೊರಬಂದಾಗ ತಲೆಯಲಿ ನೂರೆಂಟು ಪ್ರಶ್ನೆ.
ಗೈಡ್ ಹೇಳಿದ ಹಾಗೇ ಇದು 'ವಿಜ್ಞಾನ ಉತ್ತರಿಸಿಲಾಗದ ಕೌತಕವೇ?' ಅಥವಾ ಇದೆಲ್ಲಾ 'ಆಪ್ಟಿಕಲ್ ಇಲ್ಯೂಷನ್' ಪ್ರಭಾವವೇ? ಅಥವಾ ಎಲ್ಲೋ ಓದಿದ ಹಾಗೇ ಅಲ್ಲಿರಬಹುದಾದ ವಿಪರೀತ ಖನಿಜದ ಪ್ರಭಾವವೇ ಅದು ? ಅಲ್ಲಿ ನಿಜವಾಗಿಯೂ ಗುರುತ್ವಾಕರ್ಷಣ ಶಕ್ತಿ ಬೇರೆ ಕಡೆ ಇದ್ದಾಗೆ ಇಲ್ಲವೇ? ಅಥವಾ ಇನ್ನೂ ಕೆಲವು ಜನ ಹೇಳುವಂತೆ ಅದು ಅನ್ಯಗ್ರಹಿಗಳು ಭೂಮಿಯಲ್ಲಿ 'ಹಾರುವ ತಟ್ಟೆ' ಬಚ್ಚಿಟ್ಟ ಸ್ಥಳವೇ?
ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತೆ...
ಮಿಸ್ಟಿರೀ ಪಾಯಿಂಟ್ನಿಂದ ನಾವು ಹೊರಟಿದ್ದು '೧೭ ಮೈಲಿಗಳ ಡ್ರೈವ್'ಗೆ . ಈ ಜಾಗ ಹೆಸರೇ ಹೇಳುವಂತೆ ೧೭ ಮೈಲಿಗಳ ಸುಂದರ ಕಡಲು ತೀರದ ಉದ್ದಕ್ಕೂ ಸಾಗುವ ರಸ್ತೆ. ಇದರಲ್ಲಿ ಸುಮಾರು ೨೦ ಪಾಯಿಂಟ್ಗಳು ಸಿಗುತ್ತೆ. ಅಲ್ಲಿಂದ ಫೆಸಿಪಿಕ್ ಎಷ್ಟು ಅದ್ಬುತವಾಗಿ ಕಾಣುತಿತ್ತು.ಫೆಸಿಪಿಕ್ ಗ್ರೂವ್ನಿಂದ ಶುರುವಾಗೋ ಇದು ಸ್ಪಾನಿಷ್ ಬೇ, ಪೆಬೆಲ್ ಬೀಚ್, ಬರ್ಡ್ಸ್ ಎನ್ಕ್ಲೋವ್, ಲೋನ್ಲಿ ಸೈಪ್ರ್ಅಸ್ ಟ್ರೀ..ಹೀಗೆ ಕೆಲವು ವಿಶಿಷ್ಟವಾದ ಪ್ರೇಕ್ಷಣೀಯ ಪಾಯಿಂಟ್ಗಳ ಮೂಲಕ ಹೋಗುತ್ತೆ.
೧೭ ಮೈಲ್ ಡ್ರೈವ್ ನಂತರ ನಾವು ಮರಳಿ ಕುಪರ್ಟಿನೋಗೆ ಹೊರಟಾಗ ಆಗಲೇ ಸಂಜೆ ಆಗುತಿತ್ತು.
ಅಂದು ಬೆಳಿಗ್ಗೆ ನೋಡಿದ 'ಮಿಸ್ಟಿರೀ ಪಾಯಿಂಟ್' ಬಗ್ಗೆ ಯೋಚಿಸುತ್ತಿದ್ದೆ, ಆಗ ಅನಿಸಿದ್ದು ಇವೆಲ್ಲಕ್ಕಿಂತ ಮಿಗಿಲಾದ ಒಂದು 'ಮಿಸ್ಟಿರೀ ಪಾಯಿಂಟ್' ಒಂದು ಇದೆ ಅಂತಾ. ಅದು ಬೇರೆ ಎಲ್ಲೂ ಇಲ್ಲ, ನಮ್ಮಲ್ಲೇ ಇರೋದು ಅದು. ಅದೇ ನಮ್ಮ ಮನಸ್ಸು ! ಸಂತಸ, ದುಃಖ, ಆಸೆ, ನಿರಾಸೆ, ಮೋಹ, ದಾಹ, ಸಿಟ್ಟು, ಕೋಪ, ಕರುಣೆ, ವಾತ್ಸಲ್ಯ..ಹೀಗೆ ಹತ್ತು ಹನ್ನೊಂದು ಭಾವನೆಗಳು ಹುಟ್ಟೋದು ಒಂದೇ ಜಾಗದಲ್ಲಿ, ಅದು ಮನಸೆಂಬ ಈ ಮಿಸ್ಟಿರೀ ಪಾಯಿಂಟ್ನಲ್ಲಿ.
ಈ ಮನಸಿಗಿಂತ ಬೇರೆ 'ಮಿಸ್ಟಿರೀ ಪಾಯಿಂಟ್' ಉಂಟೇ ?
Thursday, January 18, 2007
Sunday, January 14, 2007
ಸಂಕ್ರಮಣ
ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಂತೆ
ನನ್ನ ಜೀವನದಲಿ ಬಂದವಳು ನೀನು
ಸುಗ್ಗಿಕಾಲ ರೈತನಿಗೆ ಹುಲುಸು ಬೆಳೆ ತಂದಂತೆ
ನನ್ನ ಬಾಳಿನಲ್ಲಿ ತುಂಬು ಪ್ರೀತಿ ತಂದವಳು ನೀನು
ಕಬ್ಬಿನ ಜಲ್ಲೆಗಳ ಸಿಹಿ ಮರೆಸುವಂತೆ
ನನಗೆ ಜೇನು ಉಣಿಸಿದವಳು ನೀನು
ಮನೆಗಳಲಿ ಎಳ್ಳು-ಬೆಲ್ಲವಾ ಬೀರಿದಂತೆ
ನನ್ನ ಮನದಲಿ ಅಮೃತ ಬೀರಿದವಳು ನೀನು
ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು
ರಂಗುರಂಗಿನ ಗಾಳಿಪಟಗಳು ಆಗಸದಲಿ ಚಿತ್ತಾರ ಮೂಡಿಸುವಂತೆ
ನನ್ನ ಕನಸುಗಳಲಿ ಸುಂದರ ಚಿತ್ತಾರ ಮೂಡಿಸಿದವಳು ನೀನು
ಬಣ್ಣದ ಸಕ್ಕರೆ ಗೊಂಬೆಗಳು ಸವಿಯಂತೆ
ನನ್ನ ಸಕ್ಕರೆ ಗೊಂಬೆಯೇ ಆದವಳು ನೀನು
ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ
ನನ್ನ ಜೀವನದಲಿ ಬಂದವಳು ನೀನು
ಸುಗ್ಗಿಕಾಲ ರೈತನಿಗೆ ಹುಲುಸು ಬೆಳೆ ತಂದಂತೆ
ನನ್ನ ಬಾಳಿನಲ್ಲಿ ತುಂಬು ಪ್ರೀತಿ ತಂದವಳು ನೀನು
ಕಬ್ಬಿನ ಜಲ್ಲೆಗಳ ಸಿಹಿ ಮರೆಸುವಂತೆ
ನನಗೆ ಜೇನು ಉಣಿಸಿದವಳು ನೀನು
ಮನೆಗಳಲಿ ಎಳ್ಳು-ಬೆಲ್ಲವಾ ಬೀರಿದಂತೆ
ನನ್ನ ಮನದಲಿ ಅಮೃತ ಬೀರಿದವಳು ನೀನು
ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು
ರಂಗುರಂಗಿನ ಗಾಳಿಪಟಗಳು ಆಗಸದಲಿ ಚಿತ್ತಾರ ಮೂಡಿಸುವಂತೆ
ನನ್ನ ಕನಸುಗಳಲಿ ಸುಂದರ ಚಿತ್ತಾರ ಮೂಡಿಸಿದವಳು ನೀನು
ಬಣ್ಣದ ಸಕ್ಕರೆ ಗೊಂಬೆಗಳು ಸವಿಯಂತೆ
ನನ್ನ ಸಕ್ಕರೆ ಗೊಂಬೆಯೇ ಆದವಳು ನೀನು
ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ
Saturday, January 06, 2007
ನನ್ನಾಕೆ
ನನ್ನಾಕೆ ನಡೆದರೆ
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ
ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ
ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ
ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ
ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ
ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ
ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ
*********************************************
ವಿಕ್ರಾಂತ ಕರ್ನಾಟಕದಲ್ಲಿ ಈ ಕವನ ಪ್ರಕಟಮಾಡಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*********************************************
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ
ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ
ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ
ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ
ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ
ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ
ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ
*********************************************
ವಿಕ್ರಾಂತ ಕರ್ನಾಟಕದಲ್ಲಿ ಈ ಕವನ ಪ್ರಕಟಮಾಡಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*********************************************
Subscribe to:
Posts (Atom)