ತುಂಗೆಯ ತೀರದಿಂದ ತಂದು ಮಲ್ಲಿಗೆ ಸಸಿಯೊಂದ
ಮನದ ಅಂಗಳದಿ ಹಚ್ಚಿ ಪ್ರೀತಿಯ ಸಿಂಚನ ಮಾಡಲು
ಅರಳಿದೆ ಮೊಗ್ಗು ನನ್ನ ಎದೆಯಂಗಳದಿ
ಪ್ರೀತಿಯ ಪರಿಮಳ ಬೀರಲಿದೆ ನನ್ನ ಮನೆಯಂಗಳದಿ
ಹೀಗೆ ನನ್ನ ಎದೆಯ ತುಂಬಾ ಮೋಹಕ ಸುವಾಸನೆ ಸೂಸುತ್ತಿರುವ ಆ ನನ್ನ ಮಧುರ ಮಲ್ಲಿಗೆಯ ಹೆಸರು ಶಿಲ್ಪಶ್ರೀ.
ಜೀವನದ ಎಲ್ಲಾ ವಸಂತ-ಗ್ರೀಷ್ಮ ಖುತುಗಳನ್ನು ಹಂಚಿಕೊಳ್ಳಲ್ಲಿರುವ ನನ್ನ ಪ್ರೀತಿಯ ಹುಡುಗಿಯನ್ನು ಬಾಳಸಂಗಾತಿಯಾಗಿ ಸ್ಪೀಕರಿಸುವ ಶುಭ ಮೂಹೂರ್ತಕ್ಕೆ ನಿಮಗೆ ಆತ್ಮೀಯ ಆಹ್ವಾನ
ಮುಹೂರ್ತ: ಭಾನುವಾರ ೨೪ ಜೂನ್ ೨೦೦೭, ಬೆಳಿಗ್ಗೆ ೧೦:೩೦ - ೧೧:೩೦
ಸ್ಥಳ: ವೀರಶೈವ ಕಲ್ಯಾಣ ಮಂದಿರ, ಶಿವಮೊಗ್ಗ
ಆರತಕ್ಷತೆ:ಶುಕ್ರವಾರ ೨೯ ಜೂನ್ ೨೦೦೭, ಸಂಜೆ ೭:೦೦ - ೧೦:೦೦
ಸ್ಥಳ:ನ್ಯೂ ಆತಿಥ್ಯ ರೆಸ್ಟೋರೆಂಟ್,ಗಾಂಧೀ ಬಜಾರ್,ಬೆಂಗಳೂರು
ಅಂದಾಗೆ ಇದರ ಜೊತೆ ಇನ್ನೊಂದು ಸಂಭ್ರಮದ ಸುದ್ದಿ ನಿಮ್ಮೊಡನೆ ಹಂಚಿಕೊಳ್ಳಲ್ಲಿಕ್ಕೆ ಇದೆ.
ಮದುವೆಯ ಹಿಂದಿನ ದಿವಸ ಅಂದರೆ ಜೂನ್ ೨೩ಕ್ಕೆ ಶಿವಮೊಗ್ಗದಲ್ಲಿ ನನ್ನ ಚೊಚ್ಚಲ ಪುಸ್ತಕ ’ಸ್ವೀಟ್ ಡ್ರೀಮ್ಸ್ ಅಂದರೇನು!’ ಬಿಡುಗಡೆ ಆಗಲಿದೆ.
ನನ್ನ ಈ ಎಲ್ಲಾ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲ್ಲಿಕ್ಕೆ ನಿಮಗೆ ಮತ್ತೊಮ್ಮೆ ಆಹ್ವಾನ..
ಪ್ರೀತಿಯಿರಲಿ
ಶಿವಶಂಕರ